ದರ್ಶನ್ ಪ್ರಕರಣದ ಜೊತೆಗೆ ಇಂದು (ಜುಲೈ 4) ಯುವರಾಜ್ಕುಮಾರ್ ವಿಚ್ಚೇದನ ಪ್ರಕರಣ ಕೂಡ ವಿಚಾರಣೆ ನಡೆಯಲಿದೆ. ಈ ಕಾರಣಕ್ಕೆ 15 ದಿನಗಳ ಹಿಂದೇನೆ ಶ್ರೀದೇವಿ ಬೈರಪ್ಪ ಅಮೆರಿಕದಿಂದ ಭಾರತಕ್ಕೆ ಹಿಂತಿರುಗಿದ್ದಾರೆ. ವಿಚಾರಣೆ ಸಮಯದಲ್ಲಿ ಶ್ರೀದೇವಿ ಬೈರಪ್ಪ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ತನಗೆ ಬೆಂಬಲವಾಗಿ ನಿಂತಿದ್ದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಈ ಪೋಸ್ಟ್ನಲ್ಲಿ ಕಳೆದ ಏಳು ತಿಂಗಳು ನೋವು ಹಾಗೂ ಆಘಾತದಿಂದ ಕೂಡಿತ್ತು ಎಂದು ಶ್ರೀದೇವಿ ಹೇಳಿಕೊಂಡಿದ್ದಾರೆ. ಹಾಗೇ ಈ ಬಾರಿ ಕೂಡ ಸತ್ಯ ಹಾಗೂ ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿರುವುದಾಗಿ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಹಾರ್ವರ್ಡ್ನಲ್ಲಿ ಶೈಕ್ಷಣಿಕ ಅಭ್ಯಾಸ ಮುಂದುವರೆಸಬೇಕಿರುವುದರಿಂದ ಮತ್ತೆ ಅಮೆರಿಕಗೆ ಹಿಂತಿಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಶ್ರೀದೇವಿ ಬೈರಪ್ಪ ಶೇರ್ ಮಾಡಿಕೊಂಡಿರುವ ಸುದೀರ್ಘ ಪೋಸ್ಟ್ ಇಲ್ಲಿದೆ.